
ಆನಂದಪುರದ ದಾಸಕೊಪ್ಪ ಗ್ರಾಮದ ವೃದ್ದೆ ರಂಗಮ್ಮನ ಮನೆ ಇತ್ತೀಚಿಗೆ ಸುರಿದ ವಿಪರೀತ ಮಳೆಗೆ ಹಾನಿಯಾಗಿದ್ದು. ಈ ಹಿಂದೆ ಪರಿಶೀಲನೆ ನಡೆಸಿ ಶಾಸಕ ಗೋಪಾಲಕೃಷ್ಣ ಬೇಳೂರು ಸರಿಪಡಿಸಿ ಕೊಡುವ ಭರವಸಿಯನ್ನು ನೀಡಿದ್ದರು.

ನೀಡಿದ ಭರವಸೆಯಂತೆಯೇ ತಮ್ಮ ಮುಖಂಡರಿಗಳಿಗೆಲ್ಲ ಹೇಳಿ ಹಾನಿಗೀಡಾದ ವೃದ್ದೆ ರಂಗಮ್ಮನ ಮನೆಯನ್ನು ಸರಿಪಡಿಸಿಕೊಟ್ಟಿದ್ದಾರೆ.
ಇಂದು ವೃದ್ಧೆಯ ಮನೆಗೆ ಬೇಟಿ ನೀಡಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಇನ್ನು ಮುಂದೆ ಹೊಸ ಮನೆಯಲ್ಲಿ ವಾಸ ಮಾಡುವಂತೆ ಸೂಚನೆ ನೀಡಿದರು. ಮಳೆಗಾಲ ಮುಗಿದ ಮೇಲೆ ಗೋಡೆಯ ಗಾರೆ ಕೆಲಸ ಹಾಗೂ ಇನ್ನುಳಿದ ಕೆಲಸಗಳನ್ನು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಾರ್ವಜನಿಕರು ಸಹಾಯ ಮಾಡಿದರೆ ಅವರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾರ್ಯೋನ್ಮುಖರಾಗಬೇಕು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲಾವಿಗೆರೆ, ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ, ಪ್ರಮುಖರಾದ ಗಣಪತಿ ಮಂಡಗಳಲೆ, ಉಮೇಶ್, ರಮಾನಂದ , ಮಂಜುನಾಥ ದಾಸನ್, ಅಶ್ವಿನ್, ಸಿರಿ ಜಾನ್, ರಹಮತ್ ವುಲ್ಲಾ, ಎಂ. ಎಲ್ ಈಶ್ವರ, ಮಂಜುನಾಥ್ ದಾಸಕೊಪ್ಪ , ಯಶೋದಮ್ಮ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.








